ಮೂಲಗಳ ಪ್ರಕಾರ ಏಳು ಮಂದಿ ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದೆ.
ಈ ಶಾಸಕರಿಗೆ ಈ ಬಾರಿ ಟಿಕೆಟ್ ಇಲ್ಲ:
ಹರಿಹರ ಶಾಸಕ ರಾಮಪ್ಪ, ಲಿಂಗಸುಗೂರು ಶಾಸಕ ಡಿ ಎಸ್ ಹಲಗೇರಿ, ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ಕಲಬುರಗಿ ಶಾಸಕಿ ಖನಿಜಾ ಫಾತಿಮಾ, ಅಫ್ಜಲಪುರ ಶಾಸಕ ಎಂವೈ ಪಾಟೀಲ್, ಪಾವಗಡ ಶಾಸಕ ವೆಂಕಟರಮಣಪ್ಪ ಮತ್ತು ಶಿಡ್ಲಘಟ್ಟ ಶಾಸಕ ವಿ ಮುನಿಯಪ್ಪಗೆ ಕಾಂಗ್ರೆಸ್ ಟಿಕೆಟ್ ನೀಡುತ್ತಿಲ್ಲ.
ಟಿ ಬಿ ಜಯಚಂದ್ರಗೆ ಟಿಕೆಟ್ ಇಲ್ಲ:
ಮೂಲಗಳ ಪ್ರಕಾರ ಶಿರಾ ಕ್ಷೇತ್ರದಲ್ಲಿ ಈ ಬಾರಿ ಮಾಜಿ ಸಚಿವ ಟಿ ಬಿ ಜಯಚಂದ್ರ ಅವರಿಗೆ ಕಾಂಗ್ರೆಸ್ ಟಿಕೆಟ್ ಇಲ್ಲ. ಹಾಲಿ ಶಾಸಕ ರಾಜೇಶ್ ಗೌಡ ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಬರುವ ಹಿನ್ನೆಲೆಯಲ್ಲಿ ಟಿಕೆಟ್ ನಿರಾಕರಿಸಲಾಗುತ್ತಿದೆ.
ಡಿ ಸುಧಾಕರ್ಗೆ ಟಿಕೆಟ್ ಇಲ್ಲ:
ಮಾಜಿ ಸಚಿವ, ಹಿರಿಯೂರು ಮಾಜಿ ಶಾಸಕ ಡಿ ಸುಧಾಕರ್ಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಇಲ್ಲ.
ಮೋಟಮ್ಮ ಮಗಳಿಗೆ ಟಿಕೆಟ್ ಇಲ್ಲ:
ಮೂಡಿಗೆರೆ ಟಿಕೆಟ್ ಆಕಾಂಕ್ಷಿಯಾಗಿರುವ ಮೋಟಮ್ಮ ಪುತ್ರಿ ನಯನ ಮೋಟಮ್ಮಗೆ ಕಾಂಗ್ರೆಸ್ ಟಿಕೆಟ್ ನೀಡುತ್ತಿಲ್ಲ.
ಬಿಜೆಪಿಯಿಂದ ಇಬ್ಬರು ಸಚಿವರು ಕಾಂಗ್ರೆಸ್ಗೆ ಸಾಧ್ಯತೆ:
ಸಚಿವ, ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಮತ್ತು ಸಚಿವ, ಗೋವಿಂದರಾಜನಗರ ಶಾಸಕ ವಿ ಸೋಮಣ್ಣ ಕಾಂಗ್ರೆಸ್ಗೆ ಬರಬಹುದಾದ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳನ್ನು ಮೀಸಲಿಡುವ ಬಗ್ಗೆ ಚರ್ಚೆ ನಡೆದಿದೆ.
ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ:
ಈ ಬಾರಿಯೂ ಮೇಲುಕೋಟೆಯಲ್ಲಿ ಸ್ವತಂತ್ರ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲಿಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಅಖಂಡ ಶ್ರೀನಿವಾಸಮೂರ್ತಿಗಿಲ್ಲ ಟಿಕೆಟ್..?
ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಟಿಕೆಟ್ ಕೊಡುವುದಕ್ಕೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಡಲಾಗಿದೆ.
ADVERTISEMENT
ADVERTISEMENT