ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಮಂಡೆಕೋಲು ಗ್ರಾಮದಲ್ಲಿ ಕಳೆದ ಕೆಲ ತಿಂಗಳಿನಿಂದ ಕಾಡಾನೆಗಳ ದಾಳಿಯಿಂದ ಜನರು ತತ್ತರಿಸಿದ್ದು ಇದೀಗ ಮತ್ತೆ ಆತಂಕ ಸೃಷ್ಟಿಯಾಗಿದೆ.
ಸದ್ಯ 9 ಆನೆಗಳ ಹಿಂಡು ಪಂಜಿಕಲ್ಲು ಭಾಗಗಳಲ್ಲಿ ಓಡಾಡುತ್ತಿದ್ದು, ಸುತ್ತಮುತ್ತಲ ಗ್ರಾಮಗಳ ಜನರು ಭಯಭೀತರಾಗಿದ್ದಾರೆ. ಈಗಾಗಲೇ ಹೊಲ ಗದ್ದೆ, ತೋಟಗಳಿಗೆ ನುಗ್ಗಿ ಸಾಕಷ್ಟು ಹಾನಿ ಮಾಡಿರುವ ಕಾಡಾನೆಗಳು ಇದೀಗ ಮತ್ತೆ ಪ್ರತ್ಯಕ್ಷವಾಗಿದೆ. ಈ ಕಾಡಾನೆಗಳ ಹಿಂಡು ಕಾಡು ಪ್ರದೇಶಕ್ಕೆ ಸಮೀಪವಿರುವ ಗ್ರಾಮಗಳಲ್ಲಿ ಸಹಜವಾಗಿಯೇ ಇನ್ನಷ್ಟು ಭಯ ಮೂಡಿಸಿದೆ.