ರಾಜ್ಯದ 8 ರಾಜಕೀಯ ಪಕ್ಷಗಳ ಮಾನ್ಯತೆ ರದ್ದುಪಡಿಸಿ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಆದೇಶ ಹೊರಡಿಸಿದ್ದಾರೆ.
ಮಾನ್ಯತೆ ರದ್ದುಗೊಂಡಿರುವ 8 ರಾಜಕೀಯ ಪಕ್ಷಗಳು ಚುನಾವನಾ ಆಯೋಗದ ಈ ಆದೇಶದಿಂದ ಭಾದಿತರಾಗಿದ್ದಲ್ಲಿ, ಅಗತ್ಯ ದಾಖಲೆಗಳ ಜೊತೆ 30 ದಿನಗಳ ಒಳಗಾಗಿ ಚುನಾವಣಾ ಆಯೋಗವನ್ನು ಸಂಪರ್ಕಿಸಬೇಕು ಎಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ಹೇಳಿದೆ.
ರಾಜಕೀಯ ಪಕ್ಷಗಳು ಪ್ರಜಾ ಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 29 ಸಿ ಅನ್ವಯ ಸ್ವೀಕರಿಸಲಾದ ರಾಜಕೀಯ ವಂತಿಗೆಗಳ ವಿವರಗಳನ್ನು ಪ್ರತಿ ವರ್ಷ ಸೆಪ್ಟಂಬರ್ 30 ರೊಳಗೆ ಹಾಗೂ ಆಡಿಟ್ ವರದಿನ್ನು ಪ್ರತಿ ವರ್ಷ ಅಕ್ಟೋಬರ್ ತಿಂಗಳೊಳಗೆ ಸಲ್ಲಿಸಬೇಕು.
ಹಾಗೆಯೇ ವಿಧಾನಸಭಾ ಚುನಾವಣೆ ವೆಚ್ಚದ ವಿವರಗಳನ್ನು ಚುನಾವಣೆ ನಡೆದ 75 ದಿನಗಳೊಳಗಾಗಿ ಹಾಗೂ ಲೋಕಸಭೆ ಚುನಾವಣೆ ನಡೆದ 90 ದಿನಗಳೊಳಗಾಗಿ ಸಲ್ಲಿಸಬೇಕು. ಆದರೆ ಈ 8 ಪಕ್ಷಗಳು 2017-18, 2018-19 ಮತ್ತು 2019-20ನೇ ಹಣಕಾಸು ವರ್ಷಗಳಲ್ಲಿ ನಿಗದಿತ ಅವಧಿಯೊಳಗೆ ವಂತಿಗೆ ಮತ್ತು ಖರ್ಚು-ವೆಚ್ಚದ ವಿವರ ಸಲ್ಲಿಸಿಲ್ಲ. ಹಾಗಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮಾನ್ಯತೆ ಕಳೆದುಕೊಂಡ ರಾಜ್ಯದ 9 ಪಕ್ಷಗಳ ಪಟ್ಟಿ ಇಂತಿದೆ.
- ಇಂಡಿಯನ್ ವೋಟರ್ಸ್ ವೆಲ್ಫೇರ್ ಪಾರ್ಟಿ,
- ಕರ್ನಾಟಕ ಕ್ರಾಂತಿ ದಳ,
- ನವ ನಿರ್ಮಾಣ ನಾಗರಿಕ ಸಮಿತಿ,
- ರಾಷ್ಟ್ರೀಯ ಜನಾಂದೋಲನ ಪಕ್ಷ,
- ಸ್ವರ್ಣ ಯುಗ ಪಕ್ಷ,
- ಟಿಪ್ಪು ಸುಲ್ತಾನ್ ನ್ಯಾಷನಲ್ ಪಬ್ಲಿಕ್ ಪಾರ್ಟಿ,
- ಯುನೈಟೆಡ್ ಇಂಡಿಯನ್ ಡೆಮಾಕ್ರಟಿಕ್ ಕೌನ್ಸಿಲ್,
- ಅರಸ್ ಸಂಯುಕ್ತ ಪಕ್ಷ
ಮಾನ್ಯತೆ ಕಳೆದುಕೊಂಡ ರಾಜಕೀಯ ಪಕ್ಷಗಳು 30 ದಿನಗಳ ಒಳಗಾಗೀ ಚುನಾವಣಾ ಆಯೋಗನ್ನು ಸಂಪರ್ಕಿಸಬಹುದಾಗಿದೆ.