ಹರಿಯಾಣದಲ್ಲಿ ರಾಹುಲ್ ಗಾಂಧಿ (Rahul Gandhi) ರೈತರ ಜೊತೆ ಬೆರೆತು ರೈತರಾಗಿದ್ದಾರೆ. ಗದ್ದೆಗಿಳಿದು ಭತ್ತ ನಾಟಿ ಮಾಡಿದ್ದಾರೆ. ಟ್ರ್ಯಾಕ್ಟರ್ನಲ್ಲಿ ಉಳುಮೆ ಮಾಡಿದ್ದಾರೆ.
ದೆಹಲಿಯಿಂದ ಹಿಮಾಚಲಪ್ರದೇಶಕ್ಕೆ ತೆರಳುವ ಮಾರ್ಗಮಧ್ಯೆ ಸೋನಿಪತ್ನಲ್ಲಿ ಕಾರು ನಿಲ್ಲಿಸಿದ ಬರೋಡಾ, ಮದಿನಾ ಸೇರಿ ಹಲವು ಹಳ್ಳಿಗಳ್ಳಲ್ಲಿ ಸುತ್ತಾಡಿದರು.
ಹೊಲದಲ್ಲಿ ಕೃಷಿ ಕಾರ್ಯದಲ್ಲಿ (Farming) ನಿರತರಾಗಿದ್ದ ರೈತರ ಜೊತೆ ರಾಹುಲ್ ಗಾಂಧಿ ಖುಷಿ ಖುಷಿಯಾಗಿ ಬೆರೆತರು. ಅವರ ಕಷ್ಟ ಸುಖಗಳಿಗೆ ದನಿಯಾದರು..
ರೈತರ ಕಷ್ಟವನ್ನು ತಿಳಿಯಲು ಟ್ರ್ಯಾಕ್ಟರ್ (Tractor) ಮೂಲಕ ಹೊಲವನ್ನು ಉಳುಮೆ ಮಾಡಿದರು. ರೈತರ ಜೊತೆ ಸೇರಿ ಭತ್ತ ನಾಟಿ ಮಾಡಿದರು.
ಭಾರತ್ ಜೋಡೋ ಯಾತ್ರೆ ನಡೆಸಿದ ದಿನದಿಂದಲೂ ರಾಹುಲ್ ಗಾಂಧಿ ಜನಸಾಮಾನ್ಯರೊಡನೆ ಬೆರೆಯುವ ಪರಿಪಾಠವನ್ನು ಹೆಚ್ಚು ಮಾಡಿಕೊಂಡಿದ್ದಾರೆ. ವಿವಿಧ ವರ್ಗಗಳ ಜೊತೆ ಬೆರೆತು ಅವರ ಕಷ್ಟ ಸುಖಗಳನ್ನು ತಿಳಿಯ ತೊಡಗಿದ್ದಾರೆ.
ಇತ್ತೀಚಿಗೆ ಚಂಡೀಘಡ-ದೆಹಲಿ ಹೈವೇಯಲ್ಲಿ ಟ್ರಕ್ ನಲ್ಲಿ ಸಂಚರಿಸಿ ಚಾಲಕರ ಕಷ್ಟವನ್ನು ತಿಳಿದುಕೊಳ್ಳುವ ಪ್ರಯತ್ನಗಳನ್ನು ರಾಹುಲ್ ಗಾಂಧಿ ಮಾಡಿದ್ದರು.
ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಜೊತೆ ಬೈಕ್ ರೈಡ್ ಮಾಡಿದ್ದರು. ಬಿಎಂಟಿಸಿ ಬಸ್ನಲ್ಲಿ ಸಂಚರಿಸಿ ಜನರೊಡನೆ ಬೆರೆತಿದ್ದರು.
ಕಳೆದ ವಾರ ದೆಹಲಿಯಲ್ಲಿ ಬೈಕ್ ಮೆಕಾನಿಕ್ ಶಾಪ್ಗೆ ಭೇಟಿ ನೀಡಿ, ಮೆಕಾನಿಕ್ ಕಷ್ಟವನ್ನು ಆಲಿಸಿದ್ದರು. ತಾವೇ ಸಗಪಾನರ್ ಹಿಡಿದು ಬೈಕ್ ರಿಪೇರಿ ಮಾಡಿದ್ದರು.
ರಾಹುಲ್ ಗಾಂಧಿ ದಿನ ಕಳೆದಂತೆ ಜನಪ್ರೀತಿಯ ಕೃಷಿಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ.
ADVERTISEMENT
ADVERTISEMENT