30 ವರ್ಷವಾದರೂ ಮದುವೆ ಆಗಿಲ್ಲ ಎಂಬ ಕೊರಗು. ಇತ್ತ ಮಂಡ್ಯ ಜಿಲ್ಲೆಯ ಕೆ ಎಂ ದೊಡ್ಡಿಯ ಅವಿವಾಹಿತ ಯುವಕರು ಪಾದಯಾತ್ರೆ ಹೊರಟ್ಟಿದ್ದಾರೆ.
ಕೆ ಎಂ ದೊಡ್ಡಿಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ 122 ಕಿಲೋ ಮೀಟರ್ ಪಾದಯಾತ್ರೆ ಆಯೋಜಿಸಿದ್ದಾರೆ. ಅಂದಹಾಗೆ ಈ ಪಾದಯಾತ್ರೆಯಲ್ಲಿ ಬ್ರಹ್ಮಚಾರಿಗಳಿಗಷ್ಟೇ ಅವಕಾಶ.
ಮಳವಳ್ಳಿ-ಕೊಳ್ಳೇಗಾಲ-ಹನೂರು ಮಾರ್ಗವಾಗಿ ಪಾದಯಾತ್ರೆ ಸಾಗಲಿದೆ.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಕಡ್ಡಾಯವಾಗಿ 30 ವರ್ಷ ದಾಟಿರಬೇಕು. ಮದುವೆ ಆದವರು ಭಾಗವಹಿಸುವಂತಿಲ್ಲ. ಈಗಾಗಲೇ ನಿಶ್ವಿತಾರ್ಥ ಆಗಿ ಮದುವೆ ನಿಗದಿ ಆದವರೂ ಕೂಡಾ ಈ ಪಾದಯಾತ್ರೆಯಲ್ಲಿ ಬರುವಂತಿಲ್ಲ.
ಪಾದಯಾತ್ರೆಯ ವೇಳೆ ಪ್ರತಿ ಐದು ಕಿಲೋ ಮೀಟರ್ ಟೀ-ಕಾಫಿ ವ್ಯವಸ್ಥೆ ಮಾಡಲಾಗುತ್ತದೆ ಆಯೋಜಕರು ತಿಳಿಸಿದ್ದಾರೆ.