ದೀಪಾವಳಿ ಉಡುಗೊರೆ – ಗೃಹ ಲಕ್ಷ್ಮೀ ಸಹಕಾರ ಸಂಘ ಅಸ್ತಿತ್ವಕ್ಕೆ – ಸದಸ್ಯರಾಗುವುದು ಹೇಗೆ..?

ಗೃಹ ಲಕ್ಷ್ಮೀ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ ಆರ್ಥಿಕ-ಸಾಮಾಜಿಕ ಭದ್ರತೆ ನೀಡಿದ್ದ ಕಾಂಗ್ರೆಸ್‌ ಸರ್ಕಾರ ಈಗ ದೀಪಾವಳಿಗೆ ರಾಜ್ಯದ ಮಹಿಳೆಯರಿಗಾಗಿ ಮಹತ್ವದ ಉಡುಗೊರೆ ನೀಡಿದೆ.

ರಾಜ್ಯದಲ್ಲಿ ಗೃಹಲಕ್ಷ್ಮೀ ವಿವಿದೋದ್ದೇಶ ಸಹಕಾರ ಸಂಘ ಸ್ಥಾಪನೆಗೆ ಸಹಕಾರ ಸಂಘಗಳ ಅಪರ ನಿಬಂಧಕರು ಅನುಮೋದನೆಯನ್ನು ನೀಡಿದ್ದಾರೆ.

ಗೃಹ ಲಕ್ಷ್ಮೀ ವಿವಿದೋದ್ದೇಶ ಸಹಕಾರ ಸಂಘ ಸ್ಥಾಪಿಸುವುದಾಗಿ 21 ಗೃಹ ಲಕ್ಷ್ಮೀ ಫಲಾನುಭವಿಗಳನ್ನು ಪ್ರವರ್ತಕರಗಾಗಿ ಪರಿಗಣಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಖ್ಯ ಪ್ರವರ್ತಕರ ಮೂಲಕ ಸಹಕಾರ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ನೋಂದಣಿ ಪೂರ್ವದಲ್ಲಿ ಕನಿಷ್ಠ ಒಂದು ಸಾವಿರ ಸದಸ್ಯರಿಂದ 20 ಲಕ್ಷ ರೂಪಾಯಿ ಷೇರು ಹಣ ಸಂಗ್ರಹಿಸಬೇಕು ಎಂದು 90 ದಿನಗಳ ಗಡುವನ್ನು ವಿಧಿಸಿ ಸಹಕಾರ ಇಲಾಖೆ ಅನುಮತಿಯನ್ನು ನೀಡಿದೆ.

ಗೃಹ ಲಕ್ಷ್ಮೀ ವಿವಿದೋದ್ದೇಶ ಸಹಕಾರ ಸಂಘ ನೋಂದಣಿಗೆ ಅನುಮತಿ ಸಿಗುತ್ತಿದ್ದಂತೆ 31 ಜಿಲ್ಲೆಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಇಲಾಖೆಯ ನಿರ್ದೇಶಕರು ಪತ್ರ ಬರೆದಿದ್ದಾರೆ.

ಕೊಡಗು ಜಿಲ್ಲೆಗೆ 50, ಉಳಿದ ಜಿಲ್ಲೆಗಳಿಂದ ಜಿಲ್ಲೆಗೆ 65 ಫಲಾನುಭವಿಗಳಿಂದ ಸದಸ್ಯತ್ವದ ಅರ್ಜಿಯನ್ನು ಸ್ವೀಕರಿಸುವಂತೆ ಸೂಚಿಸಲಾಗಿದೆ. ಷೇರು ಮೌಲ್ಯ 1 ಸಾವಿರ ರೂಪಾಯಿ, ಪ್ರವೇಶ ಶುಲ್ಕ 100 ರೂ. ಅರ್ಜಿ ಶುಲ್ಕ 50 ರೂಪಾಯಿ ಒಟ್ಟು 1,250 ರೂಪಾಯಿಯನ್ನು ಸಂಗ್ರಹಿಸುವಂತೆ ಸೂಚಿಸಲಾಗಿದೆ.

ಷೇರುದಾರರ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, 4 ಪಾಸ್‌ಪೋರ್ಟ್‌ ಅಳತೆಯ ಫೋಟೋಗಳೊಂದಿಗೆ ಪ್ರಧಾನ ಕಚೇರಿಗೆ ಸಲ್ಲಿಸಬೇಕು ಎಂದು ಉಪ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿ ಮಹಿಳೆಯರ ಉಳಿತಾಯವನ್ನು ಹೆಚ್ಚಳ ಮಾಡುವುದು ಸಂಘದ ಪ್ರಮುಖ ಉದ್ದೇಶ. ಇದರ ಜೊತೆಗೆ ಸಂಘದ ಮೂಲಕ ಅಂಗನವಾಡಿಗಳಿಗೆ ಪೌಷ್ಠಿಕ ಆಹಾರ ಪೂರೈಕೆ, ಜನತಾ ಬಜಾರ್‌ ಸ್ಥಾಪಿಸುವ ಆಲೋಚನೆ ಇದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳ ನೇಮಕ

ಮೂರು ನಗರಸಭೆ, ಮೂವತ್ತೆಂಟು ಪುರಸಭೆ ಹಾಗೂ ಹದಿನೇಳು ಪಟ್ಟಣ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು...

ಪ್ರತಿಕ್ಷಣ Exclusive: ಸ್ಪೀಕರ್‌ ಖಾದರ್‌ ವಿರುದ್ಧ ಅವಿಶ್ವಾಸ ನಿರ್ಣಯ..?

ಅಕ್ಷಯ್‌ ಕುಮಾರ್‌.ಯು. - ಮುಖ್ಯ ಸಂಪಾದಕರು, ಪ್ರತಿಕ್ಷಣ ವಿಧಾನಸಭೆಯ ಸಭಾಧ್ಯಕ್ಷರಾಗಿರುವ (Karnataka Legislative...

ಬಿಹಾರದಲ್ಲಿ ಕಾಂಗ್ರೆಸ್‌ಗೆ ಬಾಸುಂಡೆ – ಸಿದ್ದರಾಮಯ್ಯ-ಯತೀಂದ್ರಗೆ ಹಾಲು ಕುಡಿದಷ್ಟೇ ಖುಷಿ..!

ಅಕ್ಷಯ್‌ ಕುಮಾರ್‌.ಯು. - ಮುಖ್ಯ ಸಂಪಾದಕರು, ಪ್ರತಿಕ್ಷಣ ಬಿಹಾರದಲ್ಲಿ ಕಾಂಗ್ರೆಸ್‌ನ್ನು ಬಿಲ್‌ಕುಲ್‌ ನಂಬದ...

ಹಿರಿ ಖರ್ಗೆ ಅಧ್ಯಕ್ಷ – ಕಾಂಗ್ರೆಸ್‌ ಮತ್ತಷ್ಟು ನಾಶ – ಮಗ ಕಿರಿ ಖರ್ಗೆಗಷ್ಟೇ ಲಾಭ..!

ಅಕ್ಷಯ್‌ ಕುಮಾರ್‌.ಯು. - ಮುಖ್ಯ ಸಂಪಾದಕರು, ಪ್ರತಿಕ್ಷಣ ಕಾಂಗ್ರೆಸ್‌ನವರ ಆದರಣೀಯ ನಾಯಕ ಜವಾಹರ್‌ಲಾಲ್‌...