3 ಜಿಲ್ಲೆಗಳಿಗೆ ಐವರು ತಹಶೀಲ್ದಾರ್‌ಗಳ ತಂಡ ಭೇಟಿ

ಭಾರೀ ಮಳೆಯಿಂದ ಕಲ್ಯಾಣ ಕರ್ನಾಟಕದ ಎರಡು ಜಿಲ್ಲೆಗಳೂ ಒಳಗೊಂಡಂತೆ ಮೂರು ಜಿಲ್ಲೆಗಳಲ್ಲಿ ಶಾಲೆಗಳಿಗೆ ಆಗಿರುವ ಹಾನಿಯ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದಕ್ಕೆ ರಾಜ್ಯ ಸರ್ಕಾರ ಐವರು ತಹಶೀಲ್ದಾರ್‌ಗಳ ಮೂರು ತಂಡ ರಚಿಸಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಆಯುಕ್ತಾಲಯಲ್ಲಿದರುವ ತಹಶೀಲ್ದಾರ್‌ಗಳಿಗೆ ಜವಾಬ್ದಾರಿ ನೀಡಲಾಗಿದೆ.

ತಹಶೀಲ್ದಾರ್‌ಗಳಾದ ಕೆ.ಕೋಮಲ ಮತ್ತು ಪ್ರಶಾಂತ್‌ ಎನ್‌.ಎಸ್‌ ಇಬ್ಬರೂ ಬೀದರ್‌ ಜಿಲ್ಲೆಯಲ್ಲೂ, ತಹಶೀಲ್ದಾರ್‌ಗಳಾದ ಆರ್‌.ಮಂಜುಳಮ್ಮ ಮತ್ತು ವಿ.ಭಾಗ್ಯ ಹಾವೇರಿ ಜಿಲ್ಲೆಯಲ್ಲೂ ಮತ್ತು ತಹಶೀಲ್ದಾರ್‌ ಆರ್‌.ವಿ.ಮಂಜುನಾಥ್‌ ಕಲ್ಬುರ್ಗಿ ಜಿಲ್ಲೆಯಲ್ಲೂ ಅಧ್ಯಯನ ಕೈಗೊಳ್ಳಲಿದ್ದಾರೆ.

ಅಕ್ಟೋಬರ್‌ 27, 28 ಮತ್ತು 29ರಂದು ಅಧ್ಯಯನ ಕೈಗೊಂಡು ಚಿತ್ರಗಳೊಂದಿಗೆ ಸವಿವರವಾದ ವರದಿಯನ್ನು ಆಯಕ್ತಾಲಯಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಿನ್ನೆ ನಡೆಸಿದ್ದ ಸಭೆಯಲ್ಲಿ ಅಧ್ಯಯನ ತಂಡ ರಚಿಸುವುದಕ್ಕೆ ನಿರ್ಧರಿಸಲಾಗಿತ್ತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರತಿಕ್ಷಣ Exclusive: ಹಾಸನದ MMM ಆಸ್ಪತ್ರೆ ವಿರುದ್ಧ FIR

ಹಾಸನ ನಗರದ (Hassan City) ಸಂಪಿಗೆ ರಸ್ತೆಯಲ್ಲಿರುವ (Sampige Road) ಮಹಾಲಕ್ಷ್ಮೀ...

ಪ್ರತಿಕ್ಷಣ Exclusive : ಜನಪ್ರಿಯ ಆಸ್ಪತ್ರೆಯ ಮತ್ತೊಂದು ಕರ್ಮಕಾಂಡ – FIR ದಾಖಲು

50 ಲಕ್ಷ ರೂಪಾಯಿ ವಿಮೆ ಹಣವನ್ನು ಲಪಟಾಯಿಸುವ ಸಲುವಾಗಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ...

ಜನಪ್ರಿಯ ಆಸ್ಪತ್ರೆ Dr.ಬಶೀರ ಸಿಕ್ಕಿಬಿದ್ದಿದ್ದು ಹೇಗೆ..? ಕೋರ್ಟ್‌ನಲ್ಲೇ ಲಾಕ್‌..!

ನ್ಯಾಯಾಲಯವನ್ನೇ ಯಾಮಾರಿಸಲು ಹೋಗಿ ನ್ಯಾಯಾಲಯದ ಕೈಯಲ್ಲೇ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಹಾಸನ...

ಬೆಂಗಳೂರಿನ PGಗಳಿಗೆ 1 ವಾರದ ಡೆಡ್‌ಲೈನ್‌

ಒಂದು ವಾರದೊಳಗೆ ಎಲ್ಲಾ PGಗಳು (Paying Guest) ಉದ್ದಿಮೆ ಪರವಾನಿಗೆ ಪತ್ರವನ್ನು...