Bihar Assembly Election: MGB ಮೈತ್ರಿಕೂಟದ ನಿದ್ದೆಗೆಡಿಸಿದ AIMIMನ 25..!

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Assembly Election) ರಾಷ್ಟ್ರೀಯ ಜನತಾದಳ (Rastriya Janata Dal RJD), ಕಾಂಗ್ರೆಸ್‌ (Congress) ಮತ್ತು ಎಡಪಕ್ಷಗಳನ್ನೊಳಗೊಂಡ (Left Parties) ಮಹಾಮೈತ್ರಿಕೂಟಕ್ಕೆ ಅಸಾದುದ್ದೀನ್‌ ಓವೈಸಿ ( Asaduddin Owaisi) ಅವರ ಎಂಐಎಂಐಎಂ (All India Majlis-e-Ittehadul Muslimeen -AIMIM) ಆಘಾತ ನೀಡಿದೆ.

(ಪ್ರತಿಕ್ಷಣ ಸುದ್ದಿಗಾಗಿ ವಾಟ್ಸಾಪ್‌ ನಂಬರ್‌ 97411 83147 ಅಥವಾ pratikshananews@gmail.com ನ್ನು ಸಂಪರ್ಕಿಸಿ)

100 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ಎಂಐಎಂ ತನ್ನ 25 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇವತ್ತು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಇಬ್ಬರು ಹಿಂದೂಗಳಿಗೆ ಟಿಕೆಟ್‌ ನೀಡಲಾಗಿದೆ.

  1. ಅಮೌರ್‌ – ಅಖ್ತಾರುಲ್‌ ಇಮಾನ್‌
  2. ಬಲರಾಂಪುರ್‌ – ಆದಿಲ್‌ ಹಸನ್‌
  3. ದಾಕಾ – ರಾಣಾ ರಂಜಿತ್‌ ಸಿಂಗ್‌
  4. ನರ್‌ಕಟಿಯಾ – ಶಮಿಮುಲ್‌ ಹಖ್‌
  5. ಗೋಪಾಲ್‌ಗಂಜ್‌ -ಅನಾಸ್‌ ಸಲಾಂ
  6. ಜೋಕಿ ಹಟ್‌ – ಮುರ್ಷಿದ್‌ ಆಲಂ
  7. ಬಹದ್ದೂರುಗಂಜ್‌ – ತೌಸಿಫ್‌ ಆಲಂ
  8. ಥಾಕೂರ್‌ಗಂಜ್‌ – ಗುಲಾಂ ಹಸನೈನ್‌
  9. ಕಿಸಾನ್‌ಗಂಜ್‌ – ಶಾಮಾಸ್‌ ಆಗಾಜ್‌
  10. ಬೈಸಿ – ಗುಲಾಂ ಸರ್ವರ್‌
  11. ಶೇರ್‌ಘಾಟಿ – ಶಾನ್‌ -ಇ-ಅಲಿ-ಖಾನ್‌
  12. ನಾಥ್‌ ನಗರ್‌ – ಮೊಹ್ಮದ್‌ ಇಸ್ಮಾಯಿಲ್‌
  13. ಸಿವಾನ್‌ – ಮೊಹಮ್ಮದ್‌ ಕೈಫ್‌
  14. ಕಿಯೋಟಿ – ಅನಿಸುರ್‌ ರಹಮಾನ್‌
  15. ಜಾಲೆ – ಫೈಸಲ್‌ ರಹಮಾನ್‌
  16. ಸಿಕಂದ್ರಾ – ಮನೋಜ್‌ ಕುಮಾರ್‌ ದಾಸ್‌
  17. ಮುಂಗೇರ್‌ – ಡಾ. ಮುನಾಝೀರ್‌ ಹಸನ್‌
  18. ಗೋರಾಬೋರಂ – ಅಖ್ತರ್‌ ಶಾಹನ್‌ಶಾ
  19. ಖಾಸ್ಬಾ – ಶಹನವಾಜ್‌ ಆಲಂ
  20. ಅರಾರಿಯಾ – ಮೊಹಮ್ಮದ್‌ ಮಜ್ಸೂರ್‌ ಆಲಂ
  21. ಬರಾರಿ – ಮೊಹಮ್ಮದ್‌ ಮತಿಯುರ್‌ ರೆಹಮಾನ್‌
  22. ಕೋಚ್‌ಧಾಮನ್‌ – ಸರ್ವರ್‌ ಆಲಂ
  23. ನವಡಾ – ನಾಸೀಮಾ ಖಾಟೂನ್‌
  24. ಮಧುಬನಿ – ರಶೀದ್‌ ಖಲೀಲ್‌ ಅನ್ಸಾರಿ
  25. ದರ್ಭಾಂಗ ಗ್ರಾಮೀಣ – ಮೊಹಮ್ಮದ್‌ ಜಲಾಲ್‌

2020ರ ವಿಧಾನಸಭಾ ಚುನಾವಣೆಯಲ್ಲಿ AIMIM ಗ್ರ್ಯಾಂಡ್‌ ಡೆಮಾಕ್ರಾಟಿಕ್‌ ಸೆಕ್ಯೂಲರ್‌ ಫ್ರಂಟ್‌  ಮೈತ್ರಿಯಡಿಯಲ್ಲಿ BSP ಮತ್ತು RLSP ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿತ್ತು.

5 ಲಕ್ಷದ 23 ಸಾವಿರ ಮತಗಳನ್ನು ಪಡೆದಿದ್ದ AIMIM 5 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್‌ ಮತ್ತು RJD ಮೈತ್ರಿಕೂಟದ ನಿದ್ದೆಗೆಡಿಸಿತ್ತು.

ಅಮೌರ್‌, ಬೈಸಿ, ಕೋಚ್‌ಧಾಮನ್‌, ಬಹದ್ದೂರ್‌ಗಂಜ್‌ ಮತ್ತು ಜೋಕಿಹಟ್‌ನಲ್ಲಿ AIMIM ಶಾಸಕರು ಗೆದ್ದಿದ್ದರು. ಈ ಮೂಲಕ ಸೀಮಾಂಚಲ ಭಾಗದಲ್ಲಿ ಹೊಸ ರಾಜಕೀಯ ಅಲೆಯನ್ನೃ ಸೃಷ್ಟಿಸಿತ್ತು.

ಆದರೆ 2022ರಲ್ಲಿ ಎಂಐಎಂನ ಐವರು ಶಾಸಕರ ಪೈಕಿ ಅಮೌರ್‌ ಶಾಸಕ ಅಖ್ತರುಲ್‌ ಇಮಾನ್‌ ಹೊರತುಪಡಿಸಿ ಉಳಿದ ನಾಲ್ವರು ಶಾಸಕರು RJDಗೆ ಸೇರ್ಪಡೆಯಾಗಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗಿರೀಶ್‌ ಮಟ್ಟಣ್ಣನವರ್‌ ವಿರುದ್ಧ ತನಿಖೆಗೆ ಆದೇಶ

ಗಿರೀಶ್‌ ಮಟ್ಟಣ್ಣನವರ್‌ (Girish Mattannanavar) ವಿರುದ್ಧ ಮೂರು ವಾರಗಳಲ್ಲಿ ತನಿಖೆ ನಡೆಸುವಂತೆ...

ಭೂತಾನ್‌ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Prime Minister Narendra Modi) ಇವತ್ತಿನಿಂದ...

ಹಾಸನದ ಜನಪ್ರಿಯ ಆಸ್ಪತ್ರೆ ಮಾಲೀಕ ಡಾ.ಅಬ್ದುಲ್‌ ಬಶೀರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು

ನ್ಯಾಯಾಲಯಕ್ಕೆ ಸುಳ್ಳು ಸಾಕ್ಷ್ಯ ಮತ್ತು ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಆರೋಪದಡಿಯಲ್ಲಿ ಹಾಸನ...

ದೆಹಲಿ ಕೆಂಪುಕೋಟೆ ಬಳಿ ಸ್ಫೋಟ – 8 ಸಾವು

ದೆಹಲಿಯ ಕೆಂಪುಕೋಟೆಯಲ್ಲಿ ಸಂಭವಿಸಿರುವ ಕಾರ್‌ ಬಾಂಬ್‌ ಸ್ಫೋಟದಲ್ಲಿ 8 ಮಂದಿ ಪ್ರಾಣ...