ಬಂಗಾರ ಕದ್ದ ಅಂತಾರಾಜ್ಯ ಕಳ್ಳಿ ಅಜ್ಜಿ ಬಂಧನ

ಚಿನ್ನದಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದ 70 ವರ್ಷದ ಕಳ್ಳಿ ಅಜ್ಜಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ರಾಜ್ಯದ ಸೇಲಂ ಪಟ್ಟಣದ ಸಂಡೈಪೇಟೆಯ 70 ವರ್ಷದ ಗೌರಮ್ಮ ಬಂಧಿತ ಕಳ್ಳಿ ಅಜ್ಜಿ.

ಆಗಸ್ಟ್‌ 19ರಂದು ಚಿಕ್ಕಬಳ್ಳಾಪುರದಲ್ಲಿರುವ ನವೀನ್‌ ಕುಮಾರ್‌ ಎಂಬವರು ನಡೆಸುತ್ತಿದ್ದ ಬಂಗಾರದ ಅಂಗಡಿಗೆ ಗೌರಮ್ಮ ಮತ್ತು ಆಕೆಯ ಜೊತೆಗೆ ಮತ್ತೊಬ್ಳಳು ಮಹಿಳೆ ಹೋಗಿದ್ದರು. ಹಳೆಯ ಬಂಗಾರದ ಒಡವೆಗಳನ್ನು ಬದಲಿಸಿ ಹೊಸ ಬಂಗಾರದ ಒಡವೆಗಳನ್ನು ಕೊಡುವಂತೆ ಕೇಳಿದ್ದರು.

ಹಳೆಯ ಬಂಗಾರದ ಒಡವೆ ಎಂದು ನಕಲಿ ಬಂಗಾರದ ಆಭರಣದ ನೀಡಿದ್ದ ಇಬ್ಬರೂ ಕಳ್ಳಿ ಅಜ್ಜಿಯರು ಅಂಗಡಿ ಮಾಲೀಕರ ಗಮನ ಬೇರೆಡೆ ಸೆಳೆದು ಅಂಗಡಿಯಲ್ಲಿಟ್ಟಿದ್ದ ಬಂಗಾರದ ಆಭರಣವನ್ನು ಕದ್ದಿದ್ದರು.

ಈ ಕಳ್ಳಿ ಅಜ್ಜಿಯರ ಪತ್ತೆಗೆ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ರಂಜನ್‌ ಕುಮಾರ್‌ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.

70 ವರ್ಷದ ಕಳ್ಳಿ ಅಜ್ಜಿ ಗೌರಮ್ಮನನ್ನು ಬಂಧಿಸಿದ ಪೊಲೀಸರು ಆಕೆಯಿಂದ 16.9 ಗ್ರಾಂ ತೂಕದ 2 ಲಕ್ಷದ 3 ಸಾವಿರ ರೂಪಾಯಿ ಮೌಲ್ಯದ ಬಂಗಾರದ ನೆಕ್ಲೇಸ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗಿರೀಶ್‌ ಮಟ್ಟಣ್ಣನವರ್‌ ವಿರುದ್ಧ ತನಿಖೆಗೆ ಆದೇಶ

ಗಿರೀಶ್‌ ಮಟ್ಟಣ್ಣನವರ್‌ (Girish Mattannanavar) ವಿರುದ್ಧ ಮೂರು ವಾರಗಳಲ್ಲಿ ತನಿಖೆ ನಡೆಸುವಂತೆ...

ಭೂತಾನ್‌ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Prime Minister Narendra Modi) ಇವತ್ತಿನಿಂದ...

ಹಾಸನದ ಜನಪ್ರಿಯ ಆಸ್ಪತ್ರೆ ಮಾಲೀಕ ಡಾ.ಅಬ್ದುಲ್‌ ಬಶೀರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು

ನ್ಯಾಯಾಲಯಕ್ಕೆ ಸುಳ್ಳು ಸಾಕ್ಷ್ಯ ಮತ್ತು ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಆರೋಪದಡಿಯಲ್ಲಿ ಹಾಸನ...

ದೆಹಲಿ ಕೆಂಪುಕೋಟೆ ಬಳಿ ಸ್ಫೋಟ – 8 ಸಾವು

ದೆಹಲಿಯ ಕೆಂಪುಕೋಟೆಯಲ್ಲಿ ಸಂಭವಿಸಿರುವ ಕಾರ್‌ ಬಾಂಬ್‌ ಸ್ಫೋಟದಲ್ಲಿ 8 ಮಂದಿ ಪ್ರಾಣ...