ಮೂರು ನಗರಸಭೆ, ಮೂವತ್ತೆಂಟು ಪುರಸಭೆ ಹಾಗೂ ಹದಿನೇಳು ಪಟ್ಟಣ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.
ಈ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಗಿದು ಚುನಾವಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಹೊಸದಾಗಿ ಚುನಾವಣೆ ನಡೆದು ಹೊಸ ಜನಪ್ರತಿನಿಧಿಗಳು ಆಯ್ಕೆ ಆಗುವವರೆಗೂ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ನಗರಸಭೆಗೆ ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿದ್ದರೆ, ಪುರಸಭೆಗೆ ಉಪ ವಿಭಾಗಧಿಕಾರಿ ಮತ್ತು ಪಟ್ಟಣ ಪಂಚಾಯಿತಿಗಳಿಗೆ ತಾಲೂಕು ತಹಶೀಲ್ದಾರ್ ಆಡಳಿತಾಧಿಕಾರಿಯಾಗಿದ್ದಾರೆ.
ಮೂರು ನಗರಸಭೆಗಳು:
1. ಬಾಗಲಕೋಟೆ
2. ರಬಕವಿ ಬನಹಟ್ಟಿ
3. ಮಾಲೂರು
ಮೂವತ್ತೆಂಟು ಪುರಸಭೆಗಳು:
1. ಗುರಮಿಟ್ಕಲ್
2. ಆಳಂದ
3. ಕಂಪ್ಲಿ
4. ಕೆ.ಆರ್.ನಗರ
5. ಜೇವರ್ಗಿ
6. ದೇವನಹಳ್ಳಿ
7. ಬಾಗೇಪಲ್ಲಿ
8. ಬ್ಯಾಡಗಿ
9. ರೋಣ
10. ಶ್ರೀರಂಗಪಟ್ಟಣ
11. ಹುಮ್ನಾಬಾದ್
12. ಅಫ್ಜಲ್ಪುರ
13. ಚಿಂಚೋಳಿ
14. ಚಿಟಗುಪ್ಪ
15. ತೇರದಾಳ
16. ಬಂಟ್ವಾಳ
17. ಭಾಲ್ಕಿ
18. ಮೂಡಬಿದಿರೆ
19. ಸೇಡಂ
20. ಹರಪ್ಪನಹಳ್ಳಿ
21. ಕುಣಿಗಲ್
22. ಗುಳೇದಗುಡ್ಡ
23. ಚನ್ನರಾಯಪಟ್ಟಣ
24. ಚಿತ್ತಾಪುರ
25. ಟಿ.ನರಸೀಪುರ
26. ಪಾವಗಡ
27. ಪಿರಿಯಾಪಟ್ಟಣ
28. ಮಾಗಡಿ
29. ಶಿಕಾರಿಪುರ
30. ಹಾನಗಲ್
31. ಶ್ರೀನಿವಾಸಪುರ
32. ಹೆಚ್.ಡಿ.ಕೋಟೆ
33. ಹೊನ್ನಾಳಿ
34. ಹೊಸದುರ್ಗ
35. ಹೊಳೇನರಸೀಪುರ
36. ಬನ್ನೂರು
37. ಬಾದಾಮಿ
38. ಶಿರಾಳಕೊಪ್ಪ
ಹದಿನೇಳು ಪಟ್ಟಣ ಪಂಚಾಯಿತಿಗಳು:
- ಅರಕಲಗೂಡು
- ಕಲಘಟಗಿ
- ಗುಬ್ಬಿ
- ಮುಲ್ಕಿ
- ಮೊಳಕಾಲ್ಮೂರು
- ಹಿರೇಕೆರೂರು
- ತೆಕ್ಕಲಕೋಟೆ
- ನರಸಿಂಹರಾಜಪುರ
- ಬೆಳ್ತಂಗಡಿ
- ಶಿರಹಟ್ಟಿ
- ಹನೂರು
- ಹೊನ್ನಾವರ
- ಔರಾದ್
- ಜಗಳೂರು
- ಮುಳಗುಂದ
- ಹಟ್ಟಿ
- ಯಲ್ಲಾಪುರ


