21 ಮಕ್ಕಳ ಸಾವಿಗೆ ಕಾರಣವಾದ ಕೆಮ್ಮು ಸಿರಪ್ ಕೋಲ್ಡ್ರಿಫ್ನ ಉತ್ಪಾದಕ ಸಂಸ್ಥೆ ಸ್ರೇಸನ್ ಫಾರ್ಮಾಮೆಟಿಕಲ್ಸ್ನ ಮಾಲೀಕ ಜಿ ರಂಗನಾಥ್ನನ್ನು ಬಂಧಿಸಿಲಾಗಿದೆ.
ಮಧ್ಯಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ ಇವತ್ತು ಬೆಳಗ್ಗೆ ಚೆನ್ನೈನಲ್ಲಿ ರಂಗನಾಥ್ನನ್ನು ಬಂಧಿಸಿತು.
ಕೋಲ್ಡ್ರಿಫ್ ಸಿರಪ್ನ್ನು ಸೇವಿಸಿ ಮಧ್ಯಪ್ರದೇಶವೊಂದರಲ್ಲೇ 21 ಮಕ್ಕಳು ಮೃತಪಟ್ಟಿದ್ದರು.
ಮಧ್ಯರಾತ್ರಿ 1.30ಕ್ಕೆ ಈತನ ಬಂಧನವಾಗಿದೆ. ಬಂಧನದ ಬಳಿಕ ಈತನನ್ನು ಎಸ್ಐಟಿ ಪೊಲೀಸರ ತಂಡ ಕಾಂಚಿಪುರಂದಲ್ಲಿರುವ ಔಷಧ ಉತ್ಪಾದನಾ ಘಟಕಕ್ಕೆ ಕರೆದುಕೊಂಡು ಹೋಯಿತು. ಅಕ್ಟೋಬರ್ 5ರಂದೇ ಎಸ್ಐಟಿ ಚೆನ್ನೈಗೆ ಆಗಮಿಸಿ ಈತನ ಚಲನವಲನಗಳ ಮೇಲೆ ನಿಗಾ ಇಟ್ಟಿತ್ತು.


