BJP ಪರ ಅಡ್ಡ ಮತದಾನ: ಕಾಂಗ್ರೆಸ್‌ನಿಂದ ಐವರು ಶಾಸಕರು ಅಮಾನತು

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಐವರು ಶಾಸಕರನ್ನು ಕಾಂಗ್ರೆಸ್‌ ಪಕ್ಷ ಅಮಾನತು ಮಾಡಿದೆ.

ಹರಿಯಾಣ ವಿಧಾನಸಭೆಯ ಐವರು ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿ ಹರಿಯಾಣ ಕಾಂಗ್ರೆಸ್‌ ಅಧ್ಯಕ್ಷ ರಾವ್‌ ನರೇಂದರ್‌ ಸಿಂಗ್‌ ಆದೇಶ ಹೊರಡಿಸಿದ್ದಾರೆ.

ಅಮಾನತ್ತಾದ ಶಾಸಕರು:
ನರೈನ್‌ಘರ್‌ ಕ್ಷೇತ್ರದ ಶಾಸಕರಾದ ಶ್ಯಾಲಿ ಚೌಧರಿ, ಸದೌರಾ ಕ್ಷೇತ್ರದ ಶಾಸಕರಾದ ರೇಣು ಬಾಲಾ, ರಟಿಯಾ ಕ್ಷೇತ್ರದ ಶಾಸಕರಾದ ಜರ್ನೈಲ್‌ ಸಿಂಗ್‌, ಪುಹಾನಾ ಕ್ಷೇತ್ರದ ಶಾಸಕರಾದ ಮೊಹಮ್ಮದ್‌ ಇಲಿಯಾಸ್‌ ಮತ್ತು ಹಥಿನ್‌ ಕ್ಷೇತ್ರದ ಶಾಸಕರಾದ ಮೊಹಮ್ಮದ್‌ ಇಸ್ರೈಲ್‌.

ಹರಿಯಾಣ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಕರ್ಮವೀರ್‌ ಸಿಂಗ್‌ ಬೌಧ್‌ ವಿರುದ್ಧ ಹಾಗೂ ಬಿಜೆಪಿ ಅಭ್ಯರ್ಥಿಯಾಗಿದ್ದಸತೀಶ್‌ ನಂದಲ್‌ ಪರ ತಮ್ಮ ಮತ ಚಲಾವಣೆ ಮಾಡಿದ್ದರು.

ತನ್ನದೇ ಪಕ್ಷದ ಐವರು ಶಾಸಕರ ಅಡ್ಡಮತದಾನದ ಹೊರತಾಗಿಯೂ ಕಾಂಗ್ರೆಸ್‌ನ ಕರ್ಮವೀರ್‌ ಸಿಂಗ್‌ ಗೆಲುವು ಸಾಧಿಸಿದ್ದರು.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 48 ಮತ್ತು ಕಾಂಗ್ರೆಸ್‌ 37 ಶಾಸಕರನ್ನು ಹೊಂದಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕದ ಲೋಕಸಭಾ ಸ್ಥಾನಗಳ ಸಂಖ್ಯೆ ಹೆಚ್ಚಳ, ಆದರೆ ಪ್ರಾತಿನಿಧ್ಯ ಇಳಿಕೆ..!

ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಿಂದಾಗಿ ಕರ್ನಾಟಕದಲ್ಲೂ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗಲಿದೆ. ಲೋಕಸಭಾ...

ಕರ್ನಾಟಕದ DGP ಡಾ.ಎಂ.ಎ.ಸಲೀಂ ಕಾರ್ಯಾವಧಿ ವಿಸ್ತರಣೆ

ಕರ್ನಾಟಕ ಪೊಲೀಸ್‌ ಇಲಾಖೆ ಮುಖ್ಯಸ್ಥರಾಗಿರುವ ಡಾ.ಎಂ.ಎ.ಸಲೀಂ ಅವರ ಕಾರ್ಯಾವಧಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ...

ಈ ವರ್ಷ ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆ – ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೊರತೆ ಆಗಬಹುದು ಎಂದು ಹವಾಮಾನ...

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ವಿನಯ್‌ ಕುಲಕರ್ಣಿ ಈಗ ಕೊಲೆ ಪ್ರಕರಣದ ದೋಷಿ, ನಾಳೆ ಶಿಕ್ಷೆ ಬಗ್ಗೆ ವಿಚಾರಣೆ

ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟು ದೆಹಲಿಗೆ ಹೋಗಿದ್ದ ಕಾಂಗ್ರೆಸ್‌ ಶಾಸಕ ವಿನಯ್‌...